¡Sorpréndeme!

ವಿಜಯನಗರ : ಧಗ ಧಗನೆ ಹೊತ್ತಿ ಉರಿದ ಲಾರಿ - ಪ್ರಾಣಾಪಾಯದಿಂದ ಚಾಲಕ ಪಾರು

2025-04-19 4 Dailymotion

ವಿಜಯನಗರ : ದನಗಳಿಗೆ ಹಾಕುವ ಹಿಂಡಿ ತುಂಬಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡು ಧಗ ಧಗನೆ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ಜರುಗಿದೆ.

ಬಾಗಲಕೋಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ ತಾಲೂಕಿನ ಶಿವಪುರ ಸಮೀಪದ ಹೈವೇ 50ರ ರಸ್ತೆಯಲ್ಲಿ ಏಕಾಏಕಿ ಪಲ್ಟಿಯಾಗಿದೆ. ಈ ವೇಳೆ ಡೀಸೆಲ್ ಟ್ಯಾಂಕ್ ಒಡೆದಿದ್ದು, ತಕ್ಷಣವೇ ಬೆಂಕಿ ಹತ್ತಿ ಲಾರಿ ಧಗಧಗನೇ ಹೊತ್ತಿ ಉರಿಯಲಾರಂಭಿಸಿದೆ. ಚಾಲಕ ತಕ್ಷಣವೇ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಲಾರಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ ಅಗ್ನಿಶಾಮಕ ಸಿಬ್ಬಂದಿ : ವಿಷಯ ತಿಳಿದ ಕೂಡ್ಲಿಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಕೂಡ್ಲಿಗಿ ಪಿಎಸ್ಐ ಪ್ರಕಾಶ್​ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟ್ರಾಫಿಕ್ ಜಾಮ್ ಆಗದಂತೆ ಒನ್ ವೇ ಮೂಲಕ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಘಟನೆ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :  ಚಲಿಸುತ್ತಿದ್ದ ಲಾರಿಯಲ್ಲಿ ಹಠಾತ್ ಬೆಂಕಿ: ಪೀಣ್ಯ ಸಂಚಾರ ಬಂದ್ - LORRY CATCHES FIRE